Wednesday 6 August 2014

ಸಾಕ್ಷರ ತರಗತಿ

ಸಾಕ್ಷರ  ತರಗತಿ 

ನಮ್ಮ  ಶಾಲೆಯಲ್ಲಿ  ತಾ. 6.8.2014 ರಂದು  ಸಾಕ್ಷರ  ತರಗತಿಯನ್ನು  ಉದ್ಘಾಟಿಸಲಾಯಿತು. ತರಬೇತಿ  ಪ್ರಾರಂಭಗೊಂಡಿತು. ಐ. ಇ. ಡಿ . ಸಿ . ಮಕ್ಕಳನ್ನು  ಬಿಟ್ಟರೆ  ಉಳಿದ ಎಲ್ಲಾ  ಮಕ್ಕಳು ಬಹಳ ಉತ್ಸಾಹದಿಂದ  ಚಟುವಟಿಕೆಯಲ್ಲಿ ಭಾಗವಹಿಸಿದರು. ತರಬೇತಿಯನ್ನು  ವಾರ್ಡು ಸದಸ್ಯ  ಶ್ರೀ ಹರಿಶ್ಚಂದ್ರ  ಮಂಜೇಶ್ವರರವರು  ಉದ್ಘಾಟಿಸಿದರು.  ಹೈಸ್ಕೂಲ್  ಮುಖ್ಯೋಪಾದ್ಯಾಯರಾದ  ಶ್ರೀ ಪಾಂಡುರಂಗ  ಇವರು  ಅಧ್ಯಕ್ಷ  ಸ್ಥಾನವನ್ನು ಅಲಂಕರಿಸಿದರು. ಪಿ. ಟಿ. ಎ. ಅಧ್ಯಕ್ಷರಾದ  ಶ್ರೀ ಯೂಸಫ್ರವರು  ಶುಭವನ್ನು ಹಾರೈಸಿದರು. ಶಾಲಾ  ಮುಖ್ಯೋಪಾದ್ಯಾಯರಾದ  ಶ್ರೀ ಪಿ. ಎಸ್. ಪ್ರಭಾಕರ  ಇವರು  ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತರಗತಿಯ ಪ್ರಯೋಜನದ ಕುರಿತು ರಕ್ಷಕರಿಗೆ ಮನದಟ್ಟು ಮಾಡಿದರು. ಶ್ರೀಮತಿ ಪದ್ಮಾವತಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತವನ್ನೂ  ಶ್ರೀಮತಿ ಸಾಧನ ಧನ್ಯವಾದವನ್ನು  ಕೋರಿದರು. ಶ್ರೀಮತಿ ಆಶಾಲತಾ  ಕಾರ್ಯಕ್ರಮವನ್ನು  ನಿರೂಪಿಸಿದರು. 


ಸಾಕ್ಷರ ಸಾಕ್ಷರ 
ಸಾಕ್ಷರ 


No comments:

Post a Comment