Friday 21 November 2014

ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಬಿದ್ದು ಸಿಕ್ಕಿದ ಕಿವಿಯ ಓಲೆ ಮುಖ್ಯೋಪಾಧ್ಯಾಯರಿಗೆ ನೀಡಿದ ಸಂಸೀನ


ಶಾಲಾ ದಾರಿಯಲ್ಲಿ ಬಿದ್ದು ಸಿಕ್ಕಿದ ಕಿವಿಯ ಓಲೆಯನ್ನು ಮುಖ್ಯೋಪಾಧ್ಯಾಯರಿಗೆ ನೀಡಿ ಸಂಸೀನ ಪ್ರಶಂಸೆಗೆ ಪಾತ್ರಳಾದಳು. ಅವಳ ಪ್ರಾಮಾಣಿಕತನವನ್ನು ಕಂಡು ಮೆಚ್ಚಿದ ಪಿ.ಟಿ.ಎ. ಅಧ್ಯಕ್ಷರು  ಬಹುಮಾನವನ್ನು ನೀಡಿ ಅವಳನ್ನು ಅಬಿನಂದಿಸಿದರು. ಚಿನ್ನವನ್ನು ಅದರ ಹಕ್ಕುದಾರಳಾದ ಯಕ್ಷಿತಳಿಗೆ ಅಸೆಂಬ್ಲಿಯಲ್ಲಿ ಹಸ್ತಾಂತರಿಸಲಾಯಿತು.

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಟೆಟಾನಸ್ ಚುಚ್ಚುಮದ್ದು ನೀಡಿಕೆ

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು

ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು

Thursday 20 November 2014

ರಕ್ಷಕರ ಸಮ್ಮೇಳನ

ರಕ್ಷಕರ ಸಮ್ಮೇಳನ

ನಮ್ಮ ಶಾಲೆಯಲ್ಲಿ 14-11-2014ರಂದು ರಕ್ಷಕರ ಸಮ್ಮೇಳನವು ಜರಗಿತು. ಕಾರ್ಯಕ್ರಮವನ್ನು ಹೈಸ್ಕೂಲ್ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು. ಯು.ಪಿ. ಮುಖ್ಯೋಪಾಧ್ಯಾಯರು ಶುಭವನ್ನು ಹಾರೈಸಿದರು. ಆಶಾಲತಾ ಟೀಚರ್ ರಕ್ಷಕರಿಗೆ ಸಮ್ಮೇಳನದ ಕುರಿತು ಮಾತನಾಡಿದರು.  ಮಕ್ಕಳ ಹಾರೈಕೆ ಯಾವ ರೀತಿಯಲ್ಲಿ ಮತ್ತು ಹೇಗೆ ಎಂಬುದರ ಕುರಿತು ವಿವರಿಸಿದರು.ಕಾರ್ಯಕ್ರಮವನ್ನು ಪದ್ಮಾವತಿ ಟೀಚರ್ ಸ್ವಾಗತಿಸಿ ರಾಜೇಶ್ ಕುಮಾರ್ ವಂದಿಸಿದರು.

Wednesday 12 November 2014

ಶಾಲಾ ಮಟ್ಟದ ಕಲೋತ್ಸವ


ಶಾಲಾ ಮಟ್ಟದ ಕಲೋತ್ಸವ


ನಾಲ್ಕನೇ ಹಂತದ ಮೌಲ್ಯಮಾಪನ


ನಾಲ್ಕನೇ ಹಂತದ ಮೌಲ್ಯಮಾಪನ

ನಾಲ್ಕನೇ ಹಂತದ ಮೌಲ್ಯಮಾಪನವು ಶಾಲೆಯಲ್ಲಿ ಜರಗಿತು.

Tuesday 4 November 2014

ಸದ್ಗಮಯ



ಸದ್ಗಮಯ ಕಾರ್ಯಕ್ರಮ
29-10-2014 ರಂದು ನಮ್ಮ ಶಾಲೆಯಲ್ಲಿ ಸರಕಾರಿ ಹೋಮಿಯೋ ಆಸ್ಪತ್ರೆಯ ವತಿಯಿಂದ ಸದ್ಗಮಯವೆಂಬ ಕಾರ್ಯಕ್ರಮವು ಜರಗಿತು.ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಸೆಮೀರರವರು ಉದ್ಘಾಟನೆ ಮಾಡಿದರು. ಅಧ್ಯಕ್ಷ ಸ್ಧಾನವನ್ನು ಮುಖ್ಯೋಪಾಧ್ಯಯರು ವಹಿಸಿದರು. ಸದ್ಗಮಯ ಕಾರ್ಯಕ್ರಮದ ಕುರಿತು ಡಾಕ್ಟರ್ ಅಂಬಿಳಿಯವರು ವಿವರಿಸಿದರು. ಸಂಪನ್ಮೂಲರಾದ ಡಾಕ್ಟರ್ ಪ್ರವೀಣ್ ರಾಜ್ ತರಬೇತಿಯನ್ನು ನಡೆಸಿ ಕೊಟ್ಟರು. ರಕ್ಷಕರು ಮಕ್ಕಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂಬುದರ ಕುರಿತು ಅವರು ವಿವರಿಸಿದರು. ಹೆಣ್ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದರು. ರಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಕೆಲವೊಂದು ಔಷಧಿಗಳನ್ನು ಉಚಿತವಾಗಿ ನೀಡಿದರು. ಮಕ್ಕಳ ಭವಿಷ್ಯದ ಬಗ್ಗೆ ಹೇಗೆ ಮುಂಜಾಗ್ರತೆ ವಹಿಸಬೇಕೆಂಬುದರ ಬಗ್ಗೆ ರಕ್ಷಕರಿಗೆ ಮನದಟ್ಟು ಮಾಡಿದರು.

Friday 24 October 2014

ಶಾಲಾ ಕ್ರೀಡೋತ್ಸವ

ಶಾಲಾ ಕ್ರೀಡೋತ್ಸವ

ನಮ್ಮ ಶಾಲಾ ಮಟ್ಟದ ಕ್ರೀಡೋತ್ಸವವು ತಾ. ೨೪.೧೦.೨೦೧೪ ರಂದು ನಮ್ಮ ಆಟದ ಮೃದಾನದಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಗೃದರು. ಜಿಲ್ಲಾ ಪಂಚಾಯತು ಮೆಂಬರ್ ಶ್ರೀಮತಿ . ಮಮತ ದಿವಾಕರ್ ಸ್ವರ್ಧಾಳುಗಳಿಂದ ಸೆಲ್ಯೂಟ್ ಸ್ವೀಕರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.




Tuesday 21 October 2014

ಸಬ್ ಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಉದ್ಯಾವರ ಯು.ಪಿ.ಶಾಲೆಯ ವಿಜೇತರು

 ಸಬ್ ಜಿಲ್ಲಾ ವೃತ್ತಿ ಪರಿಚಯ ಮೇಳದಲ್ಲಿ ಉದ್ಯಾವರ ಯು.ಪಿ.ಶಾಲೆಯ ವಿಜೇತರು

ನಮ್ಮ ಶಾಲೆಯಿಂದ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿದವರು ಮತ್ತು ವಿಜೇತರು

1.  AGARBATTI MAKING-- DEEKSHITH.R. --- First A Grade. 249 Points
2.  BAMBOO PRODUCT-AKASH CLINTON ALVARES-Third BGrade.183Points . 3.BEADS WORKS-- SHREYA.H-- Third AGrade. 212 Points
4. BOOK BINDING--MOHAMMAD ASIK--  SecondA Grade. 225 Points
5. COCCONUT PRODUCTS-- ROHAN CONEIRO.C-- Third A Grade. 210 points
6. EMBROIDERY-- AVISHA D'SOUZA-- B Grade. 187 Points
7. FABRIC  PAINTING-- YASHAVANTHA-- C Grade. 160Points
8. THREAD PATTERN-- DHANUSH-- Third A Grade. 229 Points
9. PALM LEAVE PRODUCTS-- MOHAMMAD RAZIK-- 129 Points
10. NET MAKING-- MOHAMMAD BASHEER-- First A Grade- 246 Points

Wednesday 8 October 2014

ಸಾಕ್ಷರ ಮೌಲ್ಯಮಾಪನ ಎರಡನೇ ಹಂತ

ಸಾಕ್ಷರ ಮೌಲ್ಯಮಾಪನ  ಎರಡನೇ ಹಂತ

ಎರಡನೇ ಹಂತದ ಮೌಲ್ಯಮಾಪನವು ಇಂದು ನಮ್ಮ ಶಾಲೆಯಲ್ಲಿ ಜರಗಿತು. ಎಲ್ಲಾ ಮಕ್ಕಳು ಮೌಲ್ಯಮಾಪನ ಚಟುವಟಿಕೆಯಲ್ಲಿ ಭಾಗವಹಿಸಿದರು.

Wednesday 1 October 2014

ಗಾಂಧಿ ಜಯಂತಿ

ಗಾಂಧಿ ಜಯಂತಿ

ನನ್ನ ಜೀವನವೇ ನನ್ನ ಸಂದೇಶ ವೆಂದು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅಕ್ಟೋಬರ್ ೨ ನೇ ತಾರೀಕಿನಂದು ವಿಶೇಷವಾದ ರೀತಿಯಲ್ಲಿ ನಡಸಲಾಯಿತು. ಬೆಳಗ್ಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಲಾ ಮುಖೋಪಾಧ್ಯಾಯರು ಪುಷ್ಪ ಹಾರ ಹಾಕಿ ರಾಷ್ಟ್ರ ಪಿತನ ಸ್ಮರಣೆಯನ್ನು ಮಾಡಿದರು. ಬಳಿಕ ಎಲ್ಲಾ ಅಧ್ಯಾಪಕರುಗಳಿಂದಲೂ ವಿದ್ಯಾರ್ಥಿಗಳಿಂದಲೂ ಗಾಂದೀಜಿಗೆ ಪುಷ್ಪಗಳಿಂದ ಅರ್ಚನೆ ನಡೆಯಿತು. ಬಳಿಕ ಗಾಂಧೀಜಿಯವರ ಭಾವಚಿತ್ರದ ಕೆಳಗೆ ಕುಳಿತು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಧರ್ಮ ಗ್ರಂಥಗಳ ಪಠನ, ಸಂದೇಶ ವಾಚನ, ಭಕ್ತಿ ಗೀತೆ ವಿದ್ಯಾರ್ಥಿಗಳಿಂದ ನಡೆಯಿತು.ಬಳಿಕ ಗೈಡ್ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಇದರಿಂದ ಮಕ್ಕಳಿಗೆ ಗಾಂಧೀಜಿಯವರ ಸರ್ವ ಧರ್ಮ ಸಮಾನ ತತ್ವವನ್ನು ಮಕ್ಕಳು ಕಂಡುಕೊಳ್ಳುವಂತಾಯಿತು. ಬಳಿಕ ಗಾಂಧೀಜಿಯವರ ಪ್ರೀತಿಯ ಭಜನೆಗಳನ್ನು ಕೇಳಿಸಲಾಯಿತು. ದಂಡಿಯಾತ್ರೆಯ ಸಿ.ಡಿ ಪ್ರದರ್ಶನ ಸಡೆಸಲಾಯಿತು.ಬಳಿಕ ಶಾಲಾ ಅಧ್ಯಾಪಿಕೆಯರಿಂದ ಗಾಂದೀಜಿಯ ಜೀವಚರಿತ್ರೆ ,ಸ್ವಾತಂತ್ರ್ಯ ಸಂಗ್ರಾಮ ಹಾಗು ಅಂತಿಮ ದಿನಗಳು ಎಂಬ ಮೂರು ಹಂತಗಳಾಗಿ ಭಾಷಣ ನಡೆಯಿತು. ಗಾಂದೀಜಿಯ ಸೂಕ್ತಿಯನ್ನು ಸಂಗ್ರಹಿಸಿ ಹೇಳಲಾಯಿತು. ಶಾಲಾ ಅಧ್ಯಾಪಿಕೆಯರಾದ ಆಶಾಲತಾ, ರಾಜೇಶ್, ಸಾಧನ, ಜೋಶ್ನ, ಪದ್ಮಾವತಿ ಉಪಸ್ಥಿತರಿದ್ದು ಯೋಗ್ಯ ಮಾರ್ಗ ದರ್ಶನ ನೀಡಿದರು. ಮಕ್ಕಳಿಗೆ ಕಲ್ಲು ಸಕ್ಕರೆ ಹಂಚಲಾಯಿತು.

Sunday 28 September 2014

ಸಾಕ್ಷರ ಶಿಬಿರ

ಸಾಕ್ಷರ ನವೋಲ್ಲಾಸ ಶಿಬಿರ 2014 

ನಮ್ಮ ಶಾಲೆಯಲ್ಲಿ ಸಾಕ್ಷರ ಶಿಬಿರವನ್ನು 27-9-2014 ರಂದು ನಡೆಸಲಾಯಿತು. ಸಾಕ್ಷರ ತರಗತಿಯಲ್ಲಿರುವ ಕೆಲವೇ ಮಕ್ಕಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಮಕ್ಕಳು ಭಾಗವಹಿಸಿರುವರು.ಮಕ್ಕಳಿಗೆ ಶಿಬಿರವು ಬಹಳ ಇಷ್ಟವಾಯಿತು.ಇನ್ನೂ ಇಂತಹ ಶಿಬಿರದ ಅಗತ್ಯವಿದೆ ಎಂಬುದನ್ನು ಮಕ್ಕಳ ಫೀಡ್ ಬ್ಯಾಕ್ ನಿಂದ ತಿಳಿಯಲಾಯಿತು.  ಶಿಬಿರವನ್ನು ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು.   ಓದುವಿಕೆ ಬರವಣಿಗೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳು ಈ ಕಾರ್ಯಕ್ರಮದಲ್ಲಿ ಒಳಗೊಂಡಿತ್ತು. ಮಕ್ಕಳ ಮಾತೃಭಾಷಾ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆದ ಈ ಶಿಬಿರವು ಯಶಸ್ವಿಯಾಗಿ ನಡೆಯಿತು.

science quize

science quize

ಯು.ಪಿ.ವಿಭಾಗದ ಶಾಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು 25-9-2014 ರಂದು ನಡೆಯಿತು. ವಿಜ್ಞಾನ ಕ್ಲಬ್ ಕನ್ವೀನರ್ ಶ್ರೀ ರಾಜೇಶ್ ನೇತೃತ್ವವಹಿಸಿದರು. ಇಬ್ರಾಹಿಂ ಕಲೀಲ್ ಪ್ರಥಮ ಸ್ಥಾನವನ್ನೂ ಆಯಿಶತುಲ್ ಹಫೀಝ ದ್ವಿತೀಯ ಸ್ಥಾನವನ್ನೂ  ಗಳಿಸಿದರು.

ಮ್ಯಾಜಿಕ್ ಶೋ

ಮ್ಯಾಜಿಕ್ ಶೋ

 

ಮಂಗಳಯಾನ


        ಮಂಗಳಯಾನ ...ವೀಡಿಯೋ ಪ್ರದರ್ಶನ
 

ಹಿಂದಿ ವಾರಾಚರಣೆ


ಹಿಂದಿ ವಾರಾಚರಣೆ
ನಮ್ಮ ಶಾಲೆಯಲ್ಲಿ ಹಿಂದಿ ವಾರಾಚರಣೆಯನ್ನು 22-9-2014 ರಿಂದ 26-9-2014 ರ ವರೆಗೆ ಆಚರಿಸಲು ತೀರ್ಮಾನಿಸಲಾಯಿತು.ಹಿಂದಿ ಕ್ಲಬ್ ಕನ್ವೀನರ್ ಶ್ರೀಮತಿ.ಜೋಶ್ನ ಕಾರ್ಯಕ್ರಮವನ್ನು ನಿರೂಪಿಸಿದರು.ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು.


ABOUT US



 
ನಮ್ಮ ಶಾಲೆ
ಸಮಾಜದಲ್ಲಿ ಶಾಲೆಗೆ ಪ್ರಮುಖ ಸ್ಥಾನವಿದೆ.. "ಸಮುದಾಯದತ್ತ ಶಾಲೆ'
ಎನ್ನುವ ಘೋಷಣಾ ವಾಕ್ಯದೊಂದಿಗೆ ಕಾರ್ಯವೆಸಗುವ ಶಾಲೆಯಾಗಿದೆ ಜಿ. ಯು. ಪಿ. ಶಾಲೆ ಉದ್ಯಾವರ.
ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ತವರೂರಿನಲ್ಲಿ, ಷಷ್ಟಿ ದೇವಸ್ಥಾನವೆಂದೇ ಕೇರಳದ ಉದ್ದಗಲದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಜೇಶ್ವರ ಶ್ರೀ ಅನಂತಪದ್ಮನಾಭ ದೇವಸ್ಥಾನ ದಕ್ಷಿಣ ಭಾಗದಲ್ಲಿಯೂ,ಹಿಂದು ಮುಸ್ಲಿಂ ಭಾಂದವ್ಯವನ್ನು ಸಾರುವ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಉತ್ತರ ಭಾಗದಲ್ಯಿಯೂ ನೆಲೆಸಿಕೊಂಡು ಪೂರ್ವದಲ್ಲಿ ಬಡಾಜೆ ಶ್ರೀ ಮಹಾಲಿಂಗೇಶ್ವರನ ತವರೂರಗಿರುವ ಈ ಪ್ರದೇಶ ಪಶ್ಚಿಮ ಭಾಗದಲ್ಲಿ ವಿಶಾಲವಾಗಿ ಅರಬೀ ಸಮುದ್ರದ ಕಿನಾರೆಯನ್ನು ಹೊಂದಿರುವ ಸುಂದರವಾದ ತುಳುನಾಡಿನಲ್ಲಿ ನಮ್ಮ ಶಾಲೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರವು ನೆಲೆಸಿದೆ.

ಹಿನ್ನಲೆ

ಮಂಜೇಶ್ವರ ಪಂಚಾಯತಿಗೆ ಒಳಪಟ್ಟ ಮಂಜೇಶ್ವರ ಬ್ಲ್ಲೋಕ್ ಆಪೀಸಿನ ಸಮೀಪ ಈ ಶಾಲೆಯು ಕಿರಿಯ ಪ್ರಾಥಮಿಕ ಶಾಲೆಯಾಗಿ ಸ್ಥಾಪನೆಯಾಗಿತ್ತು. ಬಳಿಕ ಮಂಜೇಶ್ವರ ಗೇಟಿನ ಸಮೀಪದ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಸ್ಥಾಪನೆಗೊಂಡ ನಿಖರವಾದ ವರ್ಷ ತಿಳಿಯದಿದ್ದರೂ ಕೆಲವೊಂದು ಮಾಹಿತಿ ಪ್ರಕಾರ 1901 ರಲ್ಲಿ ಸ್ಥಾಪನೆಯಾಗಿದೆ ಯೆಂದು ತಿಳಿಯಬಹುದು. 1980 ರಲ್ಲಿ ಹೆತ್ತವರ ಹಾಗೂ ಊರವರ ಸತತ ಪ್ರಯತ್ನದ ಫಲವಾಗಿ ಭಡ್ತಿಗೊಂಡು ಯು.ಪಿ.ಶಾಲೆಯಾಗಿ ಪ್ರಸ್ತುತ ಮಂಜೇಶ್ವರ ಗುಡ್ಡೆಯಲ್ಲಿ ಕಾರ್ಯವೆಸಗುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಂಜೇಶ್ವರ ಗೇಟಿನ ಬಳಿಯಿಂದ ವರ್ಗಾವಣೆಗೊಂಡಿತು. ಅದುವರೆಗೆ ಗೇಟಿನ ಬಳಿ ಒಂದರಿಂದ ಏಳನೇ ತರಗತಿ ವರೆಗೆ ಇದ್ದ ಶಾಲೆಯು ಬಳಿಕ ಒಂದರಿಂದ ನಾಲ್ಕರ ವರೆಗೆ ಗೇಟಿನ ಸಮೀಪವೂ ಐದರಿಂದ ಏಳರವರೆಗೆ ಉದ್ಯಾವರ ಗುಡ್ಡೆಯಲ್ಲೂ ಕಾರ್ಯಾಚರಿಸಲು ತೊಡಗಿತು. ಆಗ ಶ್ರೀ. ಶಂಕರನಾರಾಯಣ ನಾವಡರು ಈ ಎರಡೂ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದರು. ಒಂದೇ ಶಾಲೆಯಾಗಿ ಹತ್ತು ವರುಷಗಳ ಕಾಲ ಮುಂದುವರಿಯಿತು. ಬಳಿಕ 1990 ರಲ್ಲಿ ಈ ಶಾಲೆಯು ಬೇರ್ಪಡೆಗೊಂಡಿತು. ಆ ವೇಳೆಯಲ್ಲಿ ಶ್ರೀಮತಿ. ಪದ್ಮಿನಿಯವರು ಮುಖ್ಯೋಪಾಧ್ಯಾಯಿನಿಯಾಗಿದ್ದರು. ಬಳಿಕ 1998.99 ರ ಕಾಲಾವಧಿಯಲ್ಲಿ ಶ್ರೀ. ವಾಸುದೇವ ಶೆಟ್ಟಿ, , 2001.2003 ರ ಕಾಲಾವಧಿಯಲ್ಲಿ ಶ್ರೀ. ಪ್ರಭಾಕರ ಅಗ್ಗಿತ್ತಾಯ, 2004.2008 ರ ಸಮಯದಲ್ಲಿ ಆನಂದ ಮೂಲ್ಯ, 2009.2011 ರ ಕಾಲಾವಧಿಯಲ್ಲಿ ಶ್ರೀಮತಿ. ಶಾಂತಕುಮಾರಿ ಮುಂತಾದವರು ಕಾರ್ಯನಿರ್ವಹಿಸಿರುವರು. ಇದೀಗ 2012 ರಿಂದ ಶ್ರೀ. ಪಿ. ಎಸ್. ಪ್ರಭಾಕರರವರು ಈ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಪ್ರಶಾಂತವಾದ ವಾತಾವರಣದಲ್ಲಿ ಸುಮಾರು ಮೂರು ಎಕರೆ ಸ್ಥಳವನ್ನು ಹೊಂದಿರುವ ಸುಸಜ್ಜಿತವಾದ ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ

 ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5 ಅಧ್
ನಮ್ಮ ಶಾಲೆಯು ಕೇವಲ 5,6 ಹಾಗೂ 7ನೇ ತರಗತಿ ಮಾತ್ರ ಇರುವ ಕೇರಳ ಸರಕಾರದ ಒಂದು ಅಪರೂಪದ ಶಾಲೆಯಾಗಿದೆ. ಕೇರಳದ ಉತ್ತರ ಭಾಗದಲ್ಲಿರುವ ಕರ್ನಾಟಕಕ್ಕೆ ಸಮೀಪವಾಗಿದೆ. ಗಡಿನಾಡಾದ ಮಂಜೇಶ್ವರದಲ್ಲಿರುವ ಉದ್ಯಾವರ ಯು.ಪಿ. ಶಾಲೆಯು ಕನ್ನಡ ಮಾಧ್ಯಮ ಮಾತ್ರವಿರುವ ಒಂದು ಶಾಲೆಯಾಗಿದೆ. ಸುಮಾರು 175ರಷ್ಟು ಮಕ್ಕಳು ಇರುವ ಈ ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ ಎರಡು ಡಿವಿಜನ್ ಗಳಿವೆ. ಓರ್ವ ಮುಖ್ಯೋಪಾಧ್ಯಾಯರು,5  

ಅಧ್ಯಾಪಕರು,ಓರ್ವ ಹಿಂದಿ ಅಧ್ಯಾಪಕರು ಹಾಗೂ ಓರ್ವ ಆಫೀಸ್ ಎಟೆಂಡರ್ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
.

Tuesday 16 September 2014

ಓಝೋನ್ ದಿನಾಚರಣೆಃ 16-9-2014

ಓಝೋನ್ ದಿನಾಚರಣೆಃ 16-9-2014

ಓಝೋನ್ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಓಝೋನ್ ಪದರಿನ ಬಗ್ಗೆ , ಪದರು ಉಂಟಾಗುವುದು ಹೇಗೆ , ಅದರ ರಕ್ಷಣೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ವಿಜ್ಞಾನ ಅಧ್ಯಾಪಕ ರಾಜೇಶ್ ರವರು ವಿವರಿಸಿದರು. ಇದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ವಿವಿಧ ಪ್ಲಕ್ ಕಾರ್ಡುಗಳನ್ನು ಬರೆದು ಪ್ರದರ್ಶಿಸಿದರು.

Tuesday 9 September 2014

ONAM CELEBRATION

ONAM CELEBRATION

ಓಣಂ ಹಬ್ಬವನ್ನು  ನಮ್ಮ  ಶಾಲೆಯಲ್ಲಿ ಬಹಳ  ಉತ್ತಮ ರೀತಿಯಲ್ಲಿ  ಆಚರಿಸಲಾಯಿತು. ತರಗತಿ ಮಟ್ಟದಲ್ಲಿ ಪೂಕಳ ಸ್ಪರ್ದೆಯನ್ನು ನಡೆಸಲಾಯಿತು .. ಬಳಿಕ  ಎಲ್ಲಾ  ತರಗತಿಯ ಮಕ್ಕಳಿಗೆ ಪ್ರತ್ಯೇಕ ಆಟೋಟ  ಸ್ಪರ್ಧೆಗಳನ್ನು ನಡೆಸಲಾಯಿತು ಹಾಗು ಗುಂಪು  ಸ್ಪರ್ಧೆಗಳನ್ನು ನಡೆಸಲಾಯಿತು . ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು .   ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು. ಬಳಿಕ ಶಾಲೆಯಲ್ಲಿ  ಓಣಂ ಸದ್ಯ ನಡೆಯಿತು . ಎಲ್ಲರೂ ಪಾಯಸದ ಊಟವನ್ನು ಸವಿದರು .

Friday 5 September 2014

TEACHERS DAY CELEBRATION

ACTIVITY CALENDER-SEPTEMBER


ACTIVITY CALENDER-SEPTEMBER-2014


DATE

DAYS


ACIVITY


Teacher-in-charge
1
ಕಾಲು ವಾರ್ಷಿಕ ಪರೀಕ್ಷೆ ಮೌಲ್ಯಮಾಪನ ಪಿ.ಎಮ್.
2
'' '' ''
3
'' '' ''
4
'' '' ''
5
ಅಧ್ಯಾಪಕ ದಿನಾಚರಣೆ , ಓಣಂ ದಿನಾಚರಣೆ ಗುರು ವಂದನಾ ಕಾರ್ಯಕ್ರಮ,
ದಿನದ ಪ್ರಾಧಾನ್ಯದ ಕುರಿತು ಭಾಷಣ
ಹೂವಿನ ರಂಗೋಲಿ, ಆಟೋಟ ಸ್ವರ್ಧೆಗಳು,ಓಣ ಸಧ್ಯ
.ಕೆ.
ಪಿ.ಎಮ್.
6-15
ಓಣಂ ರಜೆ



16
ಶಾಲೆ ಪುನರಾರಂಭ, ಎಸ್.ಆರ್.ಜಿ 
ಓಝೋನ್ ದಿನ
ಮೌಲ್ಯಮಾಪನದ ಬಗ್ಗೆ
ದಿನದ ಮಹತ್ವದ ಬಗ್ಗೆ ಮಾಹಿತಿ,ಮಕ್ಕಳಿಂದ ಪ್ಲಕ್ ಕಾರ್ಡ್ ತಯಾರಿ
.ಕೆ.
ರಾಜೇಶ್ ಕುಮಾರ್.ಯು.
18
ಉಳಿದ ಪರೀಕ್ಷೆಗಳ ಆರಂಭ

ಪಿ.ಎಮ್
22 - 26
ಹಿಂದಿ ವಾರಾಚರಣೆ



ಜೋಶ್ನ

ACTIVITY CALENDER-AUGUST


ACTIVITY CALENDER-AUGUST-2014


DATE
DAYS
ACTIVITY
Teacher-in-charge
1
ಎಸ್.ಆರ್.ಜಿ.
ಪಾಠ ಯೋಜನೆ,ಚರ್ಚೆ
.ಕೆ.
6
ಹಿರೋಶಿಮ ದಿನ,ಕ್ಲಬ್ ಇನೋಗರೇಶನ್
ಸಿ.ಡಿ.ಪ್ರದರ್ಶನ,ದಿನದ ಮಹತ್ವದ ಕುರಿತು ಭಾಷಣ,ಯುದ್ಧ ವಿರುದ್ಧ ಘೋಷಣೆ, ಪ್ರತಿಜ್ಞೆ ಸ್ವೀಕಾರ,
ಸಮಾಜ ಕ್ಲಬ್, ಇಂಗ್ಲೀಷ್ ಕ್ಲಬ್, ಮ್ಯಾಸ್ ಕ್ಲಬ್, ಸಯನ್ಸ್ ಕ್ಲಬ್,ವರ್ಕ್ ಎಕ್ಸ್. ಕ್ಲಬ್ ಇತ್ಯಾದಿ ಕ್ಲಬ್ ಗಳ ಉದ್ಘಾಟನೆ
ಪಿ.ಎಮ್. ಎಸ್.ಪಿ.
ಕ್ಲಬ್ ಗಳ ಕನ್ವೀನರ್ ಗಳು
8
ಎಸ್.ಆರ್.ಜಿ.
ಸ್ವಾತಂತ್ರ್ಯ ದಿನ ಆಚರಣೆ ಬಗ್ಗೆ ಚರ್ಚೆ
.ಕೆ.
9
ನಾಗಸಾಕಿ ದಿನಾಚರಣೆ
ಕ್ವಿಟ್ ಇಂಡಿಯಾ ದಿನ
ಘೋಷಣಾ ವಾಕ್ಯ ರಚನೆ ಮಕ್ಕಳಿಂದ


ಆರ್.ಕೆ.ಯು.
13
ಎಸ್ ಆರ್.ಜಿ.,ಸ್ಪರ್ಧೆಗಳು
ಪಾಠ ಯೋಜನೆ, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸ್ವರ್ಧೆಗಳು
ಎಸ್.ಪಿ.
15
ಸ್ವಾತಂತ್ರ್ಯ ದಿನಾಚರಣೆ
ಧ್ವಜಾರೋಹಣೆ, ಸಭಾ ಕಾರ್ಯಕ್ರಮ
ಬಹುಮಾನ ವಿತರಣೆ,ಭಾಷಣ, ಮನೋರಂಜನಾ ಕಾರ್ಯಕ್ರಮ
.ಕೆ.
22
ಶಾಲಾ ಚುನಾವಣೆ,ಕರಕುಶಲ ದಿನಾಚರಣೆ, ವಾರ್ಷಿಕ ಮಹಾಸಭೆ
ಸ್ಕೂಲ್ ಪಾರ್ಲಿಮೆಂಟ್,
ಎಸ್.ಪಿ.ಎಲ್.ನ ಆಯ್ಕೆ,ಕ್ಲಾಸ್ ಲೀಡರ್ ಆಯ್ಕೆ ,
ಕರಕುಶಲ ಸ್ವರ್ಧೆ, ಪಿ.ಟಿ.. ಅಧ್ಯಕ್ಷರ ಆಯ್ಕೆ, , ನೂತನ ಕಮಿಟಿ


ಆರ್.ಕೆ.ಯು.
.ಕೆ.
ಎಚ್.ಎಮ್.
28
ಕಾಲುವರ್ಷಿಕ ಮೌಲ್ಯಮಾಪನ
ಎಲ್ಲಾ ತರಗತಿಗಳಿಗೆ ಮೌಲ್ಯಮಾಪನ
ಪಿ.ಎಮ್.

ACTIVITY CALENDER-JULY


ACTIVITY CALENDER-JULY 2014
DATE
DAYS

ACTIVITY
Teacher-in-charge
1
ಡಾಕ್ಟರ್ ದಿನಾಚರಣೆ
ವನಮಹೋತ್ಸವ ದಿನಾರಂಭ
ಆರೋಗ್ಯ ತಪಾಸಣೆ, ಕ್ಲಾಸ್
ಪಂಚಾಯತು ವೈದ್ಯರಿಂದ
ಹೆಲ್ತ್ ಕ್ಲಬ್ ಕನ್ವೀನರ್ ಎ.ಕೆ.
2
ಎಸ್.ಆರ್.ಜಿ. ''
ಪರಿಸರ ಶುಚೀಕರಣ
''
3
''
ಗಿಡಗಳನ್ನು ಸಂಗ್ರಹಿಸುವುದು
''
4
''
ಮಣ್ಣು ಹದಗೊಲಿಸುವುದು
''
5
''


6
''


7
''
ಶಾಲಾ ಪರಿಸರದಲ್ಲಿ ನೆಡುವುದು
ಇಕೊ ಕ್ಲಬ್ ಕನ್ವೀನರ್ ಆರ್.ಕೆ
11
ಲೋಕ ಜನಸಂಖ್ಯಾ ದಿನ,
ಎಸ್.ಆರ್.ಜಿ.
ಜನಸಂಖ್ಯಾ ಹೆಚ್ಚಳದಿಂದ ಕಷ್ಟವೊ.....
ಸುಖವೊ....ಚರ್ಚೆ,ಸಿ.ಡಿ.ಪ್ರದರ್ಶನ,ಭಾಷಣ
ಸಮಾಜ ವಿಜ್ಞಾನ
ಕ್ಲಬ್ ಕನ್ವೀನರ್ ಎಸ್.ಪಿ.
12
ಜನಗಣತಿ ವಾರಾಚರಣೆ


13
''


14
''
ಜನಗಣತಿ/ಜನಸಂಖ್ಯಾ ಕ್ವಿಜ್,
ಜೆ ಯು.
ಪಿ..ಎಮ್.
15
''
ಸೆಮಿನಾರ್ ಮಂಡನೆ
.ಕೆ.
16
''
ಪೋಸ್ಟರ್ ರಚನೆ, ,ಪ್ರದರ್ಶನ
ಆರ್.ಕೆ
17
''
ಸಮಾರೋಪ

18
ಎಸ್. ಆರ್.ಜಿ.
ಚರ್ಚೆ, ಪ್ಲಾನಿಂಗ್
.ಕೆ.
21
ಚಾಂದ್ರ ದಿನ
ಸಿ.ಡಿ. ಪ್ರದರ್ಶನ, ಮೂನ್ ವಾಕ್
ಆರ್.ಕೆ.
25
ಎಸ್.ಆರ್.ಜಿ
ಪಾಠ ಯೋಜನೆ,ಚರ್ಚೆ
.ಕೆ.
30
ಸಿ.ಪಿ.ಟಿ..
ಸಮ ವಸ್ತ್ರ,ಶಿಸ್ತು,ಸಮಯ ಪಾಲನೆ
ಎಲ್ಲಾ ಅಧ್ಯಾಪಕರು
31
ಪ್ರೇಮ್ ಚಂದ್ ಜನ್ಮದಿನ
ಸೆಮಿನಾರ್
ಜೆ.ಯು.





Wednesday 3 September 2014


ACTIVITY CALENDER-2014-15

JUNE

DATE
DAYS
ACTIVITY
Teacher-in-Charge
2
ಪ್ರವೇಶೋತ್ಸವ
ಎಸ್ ಆರ್ ಜಿ
ನವಾಗತರಿಗೆ ಸ್ವಾಗತ, ಸಭಾ ಕಾರ್ಯಕ್ರಮ, ಮೆರವಣಿಗೆ, ಪದ್ಯ, ಆಟ, ಸಿಹಿ ತಿಂಡಿ ವಿತರಣೆ
ಎಲ್ಲಾ ಅಧ್ಯಾಪಕರು
5
ಪರಿಸರ ದಿನಾಚರಣೆ
ಗಿಡ ವಿತರಣೆ, ದಿನದ ಮಹತ್ವದ ಕುರಿತು ಭಾಷಣ, ಘೋಷಣಾ ವಾಕ್ಯ ರಚನೆ
ಆರ್ .ಕೆ .ಯು,
9
ಎಸ್.ಆರ್.ಜಿ.
ಡ್ಯೂಟಿ ಹಂಚಿಕೆ
ಎಲ್ಲಾ ಅಧ್ಯಾಪಕರು
16
ಸ್ಪೆಶಲ್ ಎಸ್.ಆರ್.ಜಿ.
ಸಾಕ್ಷರ ತರಬೇತಿಯ ಬಗ್ಗೆ ಸೂಚನೆ
,,
18
ಮೌಲ್ಯ ನಿರ್ಣಯ ತರಗತಿ ಮಟ್ಟದಲ್ಲಿ
೪ ಚಟುವಟಿಕೆ, ಡಿ ಗ್ರೇಡ್ ಸಿಕ್ಕಿಗವರ ಪಟ್ಟಿ ತಯಾರಿ
,,
19
ವಾಚನಾ ವಾರಾಚರಣೆ
ಲೈಬ್ರರಿ ಪುಸ್ತಕ ವಿತರಣೆ
ಜೋಶ್ನ
20
,,
ಓದಿನ ಸ್ವರ್ಧೆ

ಆಶಾಲತಾ
21
,,
ರಸ ಪ್ರಶ್ನೆ
ಪದ್ಮಾವತಿ
22
,,


23
,,


24
,,
ಆಶು ಭಾಷಣ ಸ್ಪರ್ಧೆ
ಸಾಧನಾ
25
,,
ಸಮಾರೋಪ ಸಮಾರಂಭ
ರಾಜೇಶ್
30
ಎಸ್.ಆರ್.ಜಿ.
ಕಲಿಕೆಯ ಬಗ್ಗೆ, ಸಮಯ ಪಾಲನೆ,ಶಿಸ್ತು,ಸಮವಸ್ತ್ರಧಾರಣೆ
ಎಲ್ಲಾ ಅಧ್ಯಾಪಕರು