Tuesday 4 November 2014

ಸದ್ಗಮಯ



ಸದ್ಗಮಯ ಕಾರ್ಯಕ್ರಮ
29-10-2014 ರಂದು ನಮ್ಮ ಶಾಲೆಯಲ್ಲಿ ಸರಕಾರಿ ಹೋಮಿಯೋ ಆಸ್ಪತ್ರೆಯ ವತಿಯಿಂದ ಸದ್ಗಮಯವೆಂಬ ಕಾರ್ಯಕ್ರಮವು ಜರಗಿತು.ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತು ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಸೆಮೀರರವರು ಉದ್ಘಾಟನೆ ಮಾಡಿದರು. ಅಧ್ಯಕ್ಷ ಸ್ಧಾನವನ್ನು ಮುಖ್ಯೋಪಾಧ್ಯಯರು ವಹಿಸಿದರು. ಸದ್ಗಮಯ ಕಾರ್ಯಕ್ರಮದ ಕುರಿತು ಡಾಕ್ಟರ್ ಅಂಬಿಳಿಯವರು ವಿವರಿಸಿದರು. ಸಂಪನ್ಮೂಲರಾದ ಡಾಕ್ಟರ್ ಪ್ರವೀಣ್ ರಾಜ್ ತರಬೇತಿಯನ್ನು ನಡೆಸಿ ಕೊಟ್ಟರು. ರಕ್ಷಕರು ಮಕ್ಕಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂಬುದರ ಕುರಿತು ಅವರು ವಿವರಿಸಿದರು. ಹೆಣ್ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದರು. ರಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಕೆಲವೊಂದು ಔಷಧಿಗಳನ್ನು ಉಚಿತವಾಗಿ ನೀಡಿದರು. ಮಕ್ಕಳ ಭವಿಷ್ಯದ ಬಗ್ಗೆ ಹೇಗೆ ಮುಂಜಾಗ್ರತೆ ವಹಿಸಬೇಕೆಂಬುದರ ಬಗ್ಗೆ ರಕ್ಷಕರಿಗೆ ಮನದಟ್ಟು ಮಾಡಿದರು.

No comments:

Post a Comment